Thursday, September 26, 2013

ಚಂದಿರ ಬಂದನು


 (ಹೊನಲಿನಲ್ಲಿ ಮೂಡಿಬಂದಿರುವ, ಹೊಸಬರಹದಲ್ಲಿರುವ ನನ್ನ ಕವಿತೆ ತಾರೀಕು: ಮೇ ೨೦ ೨೦೧೩)
 
 
 
 
 
 
 
 
 
 
 
 
 
 
 
ಬಾನಿನ ಚಂದಿರ ಬಂದನು ಹೊರಗೆ
ತೋಟದ ಅಂಚಿನ ಹೆಂಚಿನ ಮನೆಗೆ
ಬಾನಂಚ ಬದಿಯಲ್ಲಿ ಪಂಚೆಯ ಉಟ್ಟು
ಮುಗಿಲ ಮರೆಯಲ್ಲಿ ಮದುಹಾಸ ತೊಟ್ಟು
 
ಬೆಟ್ಟದ ಚಳಿಯಲ್ಲಿ ಸರಸರ ಎದ್ದು
ದಾರೀಲಿ ಅಲ್ಲಲ್ಲೆ ಕಂಬಳಿ ಹೊದ್ದು
ಬುವಿಯ ಬೆಳಕ ಬಾನಿಂದ ನೋಡಿ
ಮೊಗವನ್ನು ಆಗಾಗ ಕಿರಿಕಿರಿದು ಮಾಡಿ
 
ನಡುಮದ್ಯ ನಡೆಯುತ್ತ ನಬವನ್ನೇ ಕೆಣಕಿ
ನೆರೆಮನೆಯ ನೀರಿನ ಬಾವೀಲಿ ಇಣುಕಿ
ಅಂದಾದ ರಂಗಕ್ಕೆ ಚಂದಾವ ತಂದು
ದೂರದ ಬೆಟ್ಟದ ಬದಿಯಲ್ಲಿ ಮಿಂದು
 
ಬಾಳೆಯ ತೋಟದಿ ಸುಳಿಗಾಳಿ ಬೀಸಿ
ಹೂವಿನ ಚಪ್ಪರಕೆ ಚಾದರ ಹಾಸಿ
ಮಕ್ಕಳ ಮನದಲ್ಲಿ ಬಯಕೆಯ ಕಟ್ಟಿ
ಶರದಿಯ ನೀರನ್ನು ದೂರದಿ ತಟ್ಟಿ
 
ಹಿಡಿದನು ಬೆಳ್ಗೊಡೆ ಬಾಗ್ಯದ ಬುವಿಗೆ
ಮುಗುದದಿ ಮರಳಿದ ಬೂತಾಯಿ ಮಡಿಲಿಗೆ
ಬಾನಿನ ಚಂದಿರ ಬಂದನು ಹೊರಗೆ
ತೋಟದ ಅಂಚಿನ ಹೆಂಚಿನ ಮನೆಗೆ

No comments: