Labels

Showing posts with label ಪ್ರಸ್ತುತ. Show all posts
Showing posts with label ಪ್ರಸ್ತುತ. Show all posts

Saturday, May 31, 2014

ವೆಂಕಯ್ಯನಾಯ್ಡು:ರಾಜ್ಯಸಭೆ

ಹದಿನೈದು ವರ್ಷಗಳಿಂದ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗುತ್ತಿರುವ ವೆಂಕಯ್ಯನಾಯ್ಡು ನಾನು ಕರ್ನಾಟಕಕ್ಕೆ ಸೇರಿದವನು ಹಾಗಾಗಿಯೇ ನಾನು ಮಂತ್ರಿಯಾದ ಮೇಲೆ ಮೊದಲು ಕರ್ನಾಟಕಕ್ಕೆ ಬಂದಿದ್ದೇನೆ ಎಂದು ನಿನ್ನೆ ತಮ್ಮ ಹಿಂದಿ, ಇಂಗ್ಲಿಷ್ ಮತ್ತು ತೆಲುಗು ಭಾಷಣದಲ್ಲಿ ಮನದುಂಬಿ ಹೇಳಿದ್ದಾರೆ. ಹೀಗೆ ತಮ್ಮ ಕನ್ನಡಪರ ಕಾಳಜಿಯನ್ನು ಮೆರೆದ ನಾಯ್ಡುರವರ ಅಧಿಕೃತ ವೆಬ್‍ಪೇಜಿನಲ್ಲಿ ತಮ್ಮ ರಾಜಕೀಯ ಜೀವನದ ಬಗ್ಗೆ ವಿವರ ಕೊಟ್ಟಿದ್ದಾರೆ. ಹಿಂದೆ ತಾನು ಅಲಂಕರಿಸಿದ ಹುದ್ದೆ ಮತ್ತು ಮತ್ತು ಅದು ಎಲ್ಲಿ ಎಂದು ಹೇಳಿಕೊಂಡಿರುವ ಈ ಪುಟದಲ್ಲಿ ತಾವು ಆ ಹುದ್ದೆ ಆಂಧ್ರ ಅಥವಾ ರಾಷ್ಟ್ರಮಟ್ಟದ್ದಾಗಿದ್ದರೆ(All India, National) ಅದನ್ನು ಅಲ್ಲಿಯೇ ಹಾಕಿಕೊಂಡಿದ್ದಾರೆ - ಇದು ಸರಿಯಾಗಿದೆ.

ಆದರೆ ತಾವು ರಾಜ್ಯಸಭೆಗೆ ಆಯ್ಕೆಯಾಗಿರುವ ವಿಷಯದಲ್ಲಿ ಯಾಕೋ ಏನೋ - ರಾಜ್ಯಸಭೆಗೆ ಆಯ್ಕೆಯಾಗಿರುವುದು ಮತ್ತು ಮರು ಆಯ್ಕೆಯಾಗಿರುವುದನ್ನಷ್ಟೇ ಹೇಳಿಕೊಂಡಿದ್ದಾರೆಯೇ ಹೊರತು ತಾನು ಆಯ್ಕೆಯಾಗಿರುವುದು ಕರ್ನಾಟಕದಿಂದ ಎಲ್ಲಿಯೂ ಅಪ್ಪಿ ತಪ್ಪಿಯೂ ಹೇಳಿಕೊಂಡಿಲ್ಲ. ತನ್ನ ರಕ್ತದ ಕಣಕಣದಲ್ಲಿಯೂ ಕನ್ನಡಾಭಿಮಾನ ತುಂಬಿ ತುಳುಕುತ್ತಿರುವಾಗ ಅದನ್ನು ಯಕಶ್ಚಿತ್ ವೆಬ್‍ಪುಟದಲ್ಲಿ ಹಾಕುವುದೇಕೆ ಎಂಬ ನಿಲುವಿಗೆ ನಾಯ್ಡುಗಾರು ಬಂದಿರಬೇಕು. ಅವರು ಹೇಗೇ ಇದ್ದರೂ ಏನೇ ಮಾಡಿದರೂ ಹೈಕಮಾಂಡ್ ಆಣತಿಯಂತೆ ಪ್ರತಿ ಬಾರಿಯೂ ಅವರನ್ನು ರಾಜ್ಯಸಭೆಗೆ ಕಳುಹಿಸಿ ಕೃತಾರ್ಥರಾಗುತ್ತಿಲ್ಲವೇ.